30th April 2025
ಜಗದ್ಗುರು ಶಂಕರಾಚಾರ್ಯರು ತಮ್ಮ ಎಂಟನೇ ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು.
ಕ್ರಿ.ಶ, ಏಳನೇ ಶತಮಾನದಲ್ಲಿ ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಇತರ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡುತ್ತಿತ್ತು. ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮ ಬಿಟ್ಟು ಇತರ ಧರ್ಮದ ಕಡೆಗೆ ಜನ ಹೋಗುತ್ತಿದ್ದರು. ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಇದೆಲ್ಲಾ ಕಟ್ಟು ಕಥೆ ಎನ್ನುವಂತಹ ಕುಹಕಿಗಳ ಹಾವಳಿ ಹೆಚ್ಚಾಗಿತ್ತು.
ನಮ್ಮ ಸನಾತನ ಧರ್ಮಕ್ಕೆ ವೇದವೇ ಆಧಾರ ಅದರಲ್ಲಿ ಹೇಳಿದ್ದೆಲ್ಲವೂ ಸರಿ ಎಂದರೆ ಅವರುಗಳು ವೇದ ಎಂಬುದೇ ಅಸತ್ಯ, ಸ್ವಾರ್ಥ ಎಂದು ವಾದಿಸುತ್ತಿದ್ದರು. ಬದುಕಿರುವಾಗ ದಾನ ಧರ್ಮ ಮತ್ತು ಪುಣ್ಯ ಕಾರ್ಯಗಳನ್ನು ಮಾಡಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರೆ ಅವರು ಸ್ವರ್ಗ ನರಕ ಎನ್ನುವುದು ಇಲ್ಲವೇ ಇಲ್ಲ. ಆಳುವ ರಾಜನೇ ಪ್ರತ್ಯಕ್ಷ ದೇವರು ಅವನೇ ಪರಮೇಶ್ವರ. ಹಾಗಾಗಿ ಇದ್ದಾಗಲೇ ಸರಿಯಾಗಿ ನೋಡಿಕೊಳ್ಳದೇ ಸತ್ತ ಮೇಲೆ ಮಾಡುವ ಅಪರ ಕ್ರಿಯೆಗಳು, ಯಜ್ಞ-ಯಾಗಾದಿಗಳು ಪುರೋಹಿತರ ಹೊಟ್ಟೆ ಪಾಡಿಗೆ ಮಾಡಿಕೊಂಡ ಢಂಬಾಚಾರಗಳು ಎಂದೇ ವಾದಿಸುತ್ತಿದ್ದರು. ಸೈದ್ಧಾಂತಿಕ ಜೀವನಕ್ಕಿಂತ ಪ್ರಾಯೋಗಿಕ ಜೀವನಕ್ಕೆ ಹೆಚ್ಚಿನ ಒತ್ತು ಕೊಟ್ಟು ಬದುಕಿದ್ದಾಗಲೇ ಸಾಲಾ ಸೋಲಾ ಮಾಡಿಯಾದರೂ ಅನುಭವಿಸಿಯೇ ಬಿಡಬೇಕು. ಸತ್ತ ಮೇಲೆ ಸಿಗುವ ಸ್ವರ್ಗ, ವೈಕುಂಠ ನೋಡಿದವರು ಯಾರು ಎಂದೆಲ್ಲಾ ಹೇಳುತ್ತಿದ್ದರೆ, ಬಹುತೇಕರಿಗೆ ಅರೇ ಹೌದಲ್ಲಾ ಇವರು ಹೇಳುತ್ತಿರುವುದು ನಿಜವೇ ಎಂದೆನಿಸಿ ಎಲ್ಲರ ಮನೋಸ್ಥಿತಿಗಳು ಬದಲಾಗುತ್ತಿದ್ದಂತಹ ಕಾಲ.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ "ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು". ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರೇ ಮೊದಲಿಗರು ಹಾಗಾಗಿ ಅವರನ್ನು ಆದಿ ಶಂಕರರು ಎಂದೇ ಕರೆಯಲಾಗುತ್ತದೆ. ತಮ್ಮ ಜೀವೀತಾವಧಿಯ 32 ವರ್ಷಗಳ ಕಾಲದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ ಹೇಳಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು.
ಅದ್ವೈತವನ್ನು ಪ್ರತಿಪಾದಿಸಿದ್ದರಿಂದ ಅವರನ್ನು ಅದ್ವೈತ ಸಿದ್ಧಾಂತಿ ಎಂದೇ ಸಂಬೋಧಿಸಲಾಗುತ್ತದೆ. ಅಲ್ಲಿಯತನಕ ಎಲ್ಲರೂ ಆತ್ಮ ಮತ್ತು ಪರಮಾತ್ಮ ಎಂಬುದು ಬೇರೆ ಬೇರೆ. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಆತ್ಮ, ಪರಮಾತ್ಮನಲ್ಲಿ ಲೀನವಾಗಬೇಕು ಎಂದೇ ಪ್ರತಿಪಾದಿಸುತ್ತಿದ್ದರು. ಆದರೆ ಶಂಕರಾಚಾರ್ಯರು ಆತ್ಮ ಮತ್ತು ಪರಮಾತ್ಮಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು . ಪರಮಾತ್ಮನೇ ಆತ್ಮನು. ಎಂಬುದಾಗಿ ಅದ್ವೈತ ಸಿದ್ಧಾಂತವನ್ನು ತೋರಿಸಿಕೊಟ್ಟರು. ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ” + “ದ್ವೈತ” ಅಂದರೆ “ಎರಡಲ್ಲದ್ದು” ಇದುವೇ ಅದ್ವೈತ ಸಿಧ್ಧಾಂತದ ಮೂಲ ಸಾರ. ಹಾಗಾಗಿ ಅಹಂ ಬ್ರಹ್ಮಾಸ್ಮಿ ಅಂದರೇ ನನ್ನೊಳಿರುವ ಆತ್ಮವೇ ಪರಂಬ್ರಹ್ಮ. “ತತ್ ತ್ವಮ್ ಅಸಿ” ನಾವೆಲ್ಲರೂ ಅದೇ ಆತ್ಮವೇ ಆಗಿದ್ದೇವೆ. ಎಂಬುದೇ ಅದ್ವೈತ ತತ್ವದ ಮೂಲ ಮಂತ್ರ. ಹಾಗಾಗಿ ಪರಮಾತ್ಮ, ಎಂದರೆ ಆತ್ಮ. ಅದು ಮಾತ್ರವೇ ಸತ್ಯ. ಉಳಿದಿದ್ದೆಲ್ಲವೂ ಮಿಥ್ಯ ಹಾಗೂ ಸರ್ವಂ ಬ್ರಹ್ಮಮಯಂ ಜಗತ್ ಅಂದರೆ ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ ಎಂಬುದನ್ನು ಜಗತ್ತಿಗೆ ಸಾರುವ ಮೂಲಕ ಸನಾತನ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾನ್ ಗುರುಗಳಾದರು.
ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದರು.
ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು- ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ
ದಕ್ಷಿಣದಲ್ಲಿ: ಶೃಂಗೇರಿ ಪೀಠ – ಶಾರದಾ ಮಠ
ಪೂರ್ವದಲ್ಲಿ: ಪುರಿ ಪೀಠ – ಗೋವರ್ಧನ ಮಠ
ಪಶ್ಚಿಮದಲ್ಲಿ ದ್ವಾರಕಾ ಪೀಠ
ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು.
ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶವಿದೇಶಗಳಲ್ಲಿರುವ ಕೋಟ್ಯಾಂತರ ಹಿಂದುಗಳು ಬಹಳ ಭಕ್ತಿ ಭಾವಗಳಿಂದ ಅಚರಿಸುತ್ತಾರೆ. ವಿಶೇಷವಾಗಿ ಸಾಮೂಹಿಕ ಉಪನಯನಗಳು ಎಲ್ಲೆಡೆಯಲ್ಲಿಯೂ ನಡೆಯುತ್ತವೆ. ಉಪನಯನ ಮಾಡಿಸಿಕೊಳ್ಳುವ ವಟು, ಗಾಯತ್ರೀ ಉಪದೇಶ ಮಾಡುವ ತಂದೆಗೆ ಗುರು ಬಲವಿದ್ದರೆ ಮಾತ್ರವೇ ಉಪನಯನ ಮಾಡಬೇಕೆನ್ನುವ ಶಾಸ್ತ್ರವಿದ್ದರೂ, ಆದಿ ಗುರುಗಳಾದ ಶಂಕರರ ಜಯಂತಿಯಂದು ಉಪನಯನ ಮಾಡುವ ಸಂಪ್ರದಾಯವಿದೆ. ಅಂದು ಯಾವ ದೋಷವೂ ಇರುವುದಿಲ್ಲ ಎನ್ನಲಾಗಿದೆ.
ಡಾ. ಆರ್. ಶೈಲಜ ಶರ್ಮ
ಬೆಂಗಳೂರು-85
ಜಗದ್ಗುರು ಶಂಕರಾಚಾರ್ಯರು ತಮ್ಮ ಎಂಟನೇ ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು.
ಕ್ರಿ.ಶ, ಏಳನೇ ಶತಮಾನದಲ್ಲಿ ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಇತರ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡುತ್ತಿತ್ತು. ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮ ಬಿಟ್ಟು ಇತರ ಧರ್ಮದ ಕಡೆಗೆ ಜನ ಹೋಗುತ್ತಿದ್ದರು. ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಇದೆಲ್ಲಾ ಕಟ್ಟು ಕಥೆ ಎನ್ನುವಂತಹ ಕುಹಕಿಗಳ ಹಾವಳಿ ಹೆಚ್ಚಾಗಿತ್ತು.
ನಮ್ಮ ಸನಾತನ ಧರ್ಮಕ್ಕೆ ವೇದವೇ ಆಧಾರ ಅದರಲ್ಲಿ ಹೇಳಿದ್ದೆಲ್ಲವೂ ಸರಿ ಎಂದರೆ ಅವರುಗಳು ವೇದ ಎಂಬುದೇ ಅಸತ್ಯ, ಸ್ವಾರ್ಥ ಎಂದು ವಾದಿಸುತ್ತಿದ್ದರು. ಬದುಕಿರುವಾಗ ದಾನ ಧರ್ಮ ಮತ್ತು ಪುಣ್ಯ ಕಾರ್ಯಗಳನ್ನು ಮಾಡಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರೆ ಅವರು ಸ್ವರ್ಗ ನರಕ ಎನ್ನುವುದು ಇಲ್ಲವೇ ಇಲ್ಲ. ಆಳುವ ರಾಜನೇ ಪ್ರತ್ಯಕ್ಷ ದೇವರು ಅವನೇ ಪರಮೇಶ್ವರ. ಹಾಗಾಗಿ ಇದ್ದಾಗಲೇ ಸರಿಯಾಗಿ ನೋಡಿಕೊಳ್ಳದೇ ಸತ್ತ ಮೇಲೆ ಮಾಡುವ ಅಪರ ಕ್ರಿಯೆಗಳು, ಯಜ್ಞ-ಯಾಗಾದಿಗಳು ಪುರೋಹಿತರ ಹೊಟ್ಟೆ ಪಾಡಿಗೆ ಮಾಡಿಕೊಂಡ ಢಂಬಾಚಾರಗಳು ಎಂದೇ ವಾದಿಸುತ್ತಿದ್ದರು. ಸೈದ್ಧಾಂತಿಕ ಜೀವನಕ್ಕಿಂತ ಪ್ರಾಯೋಗಿಕ ಜೀವನಕ್ಕೆ ಹೆಚ್ಚಿನ ಒತ್ತು ಕೊಟ್ಟು ಬದುಕಿದ್ದಾಗಲೇ ಸಾಲಾ ಸೋಲಾ ಮಾಡಿಯಾದರೂ ಅನುಭವಿಸಿಯೇ ಬಿಡಬೇಕು. ಸತ್ತ ಮೇಲೆ ಸಿಗುವ ಸ್ವರ್ಗ, ವೈಕುಂಠ ನೋಡಿದವರು ಯಾರು ಎಂದೆಲ್ಲಾ ಹೇಳುತ್ತಿದ್ದರೆ, ಬಹುತೇಕರಿಗೆ ಅರೇ ಹೌದಲ್ಲಾ ಇವರು ಹೇಳುತ್ತಿರುವುದು ನಿಜವೇ ಎಂದೆನಿಸಿ ಎಲ್ಲರ ಮನೋಸ್ಥಿತಿಗಳು ಬದಲಾಗುತ್ತಿದ್ದಂತಹ ಕಾಲ.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ "ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು". ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರೇ ಮೊದಲಿಗರು ಹಾಗಾಗಿ ಅವರನ್ನು ಆದಿ ಶಂಕರರು ಎಂದೇ ಕರೆಯಲಾಗುತ್ತದೆ. ತಮ್ಮ ಜೀವೀತಾವಧಿಯ 32 ವರ್ಷಗಳ ಕಾಲದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ ಹೇಳಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು.
ಅದ್ವೈತವನ್ನು ಪ್ರತಿಪಾದಿಸಿದ್ದರಿಂದ ಅವರನ್ನು ಅದ್ವೈತ ಸಿದ್ಧಾಂತಿ ಎಂದೇ ಸಂಬೋಧಿಸಲಾಗುತ್ತದೆ. ಅಲ್ಲಿಯತನಕ ಎಲ್ಲರೂ ಆತ್ಮ ಮತ್ತು ಪರಮಾತ್ಮ ಎಂಬುದು ಬೇರೆ ಬೇರೆ. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಆತ್ಮ, ಪರಮಾತ್ಮನಲ್ಲಿ ಲೀನವಾಗಬೇಕು ಎಂದೇ ಪ್ರತಿಪಾದಿಸುತ್ತಿದ್ದರು. ಆದರೆ ಶಂಕರಾಚಾರ್ಯರು ಆತ್ಮ ಮತ್ತು ಪರಮಾತ್ಮಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು . ಪರಮಾತ್ಮನೇ ಆತ್ಮನು. ಎಂಬುದಾಗಿ ಅದ್ವೈತ ಸಿದ್ಧಾಂತವನ್ನು ತೋರಿಸಿಕೊಟ್ಟರು. ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ” + “ದ್ವೈತ” ಅಂದರೆ “ಎರಡಲ್ಲದ್ದು” ಇದುವೇ ಅದ್ವೈತ ಸಿಧ್ಧಾಂತದ ಮೂಲ ಸಾರ. ಹಾಗಾಗಿ ಅಹಂ ಬ್ರಹ್ಮಾಸ್ಮಿ ಅಂದರೇ ನನ್ನೊಳಿರುವ ಆತ್ಮವೇ ಪರಂಬ್ರಹ್ಮ. “ತತ್ ತ್ವಮ್ ಅಸಿ” ನಾವೆಲ್ಲರೂ ಅದೇ ಆತ್ಮವೇ ಆಗಿದ್ದೇವೆ. ಎಂಬುದೇ ಅದ್ವೈತ ತತ್ವದ ಮೂಲ ಮಂತ್ರ. ಹಾಗಾಗಿ ಪರಮಾತ್ಮ, ಎಂದರೆ ಆತ್ಮ. ಅದು ಮಾತ್ರವೇ ಸತ್ಯ. ಉಳಿದಿದ್ದೆಲ್ಲವೂ ಮಿಥ್ಯ ಹಾಗೂ ಸರ್ವಂ ಬ್ರಹ್ಮಮಯಂ ಜಗತ್ ಅಂದರೆ ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ ಎಂಬುದನ್ನು ಜಗತ್ತಿಗೆ ಸಾರುವ ಮೂಲಕ ಸನಾತನ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾನ್ ಗುರುಗಳಾದರು.
ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದರು.
ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು- ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ
ದಕ್ಷಿಣದಲ್ಲಿ: ಶೃಂಗೇರಿ ಪೀಠ – ಶಾರದಾ ಮಠ
ಪೂರ್ವದಲ್ಲಿ: ಪುರಿ ಪೀಠ – ಗೋವರ್ಧನ ಮಠ
ಪಶ್ಚಿಮದಲ್ಲಿ ದ್ವಾರಕಾ ಪೀಠ
ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು.
ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶವಿದೇಶಗಳಲ್ಲಿರುವ ಕೋಟ್ಯಾಂತರ ಹಿಂದುಗಳು ಬಹಳ ಭಕ್ತಿ ಭಾವಗಳಿಂದ ಅಚರಿಸುತ್ತಾರೆ. ವಿಶೇಷವಾಗಿ ಸಾಮೂಹಿಕ ಉಪನಯನಗಳು ಎಲ್ಲೆಡೆಯಲ್ಲಿಯೂ ನಡೆಯುತ್ತವೆ. ಉಪನಯನ ಮಾಡಿಸಿಕೊಳ್ಳುವ ವಟು, ಗಾಯತ್ರೀ ಉಪದೇಶ ಮಾಡುವ ತಂದೆಗೆ ಗುರು ಬಲವಿದ್ದರೆ ಮಾತ್ರವೇ ಉಪನಯನ ಮಾಡಬೇಕೆನ್ನುವ ಶಾಸ್ತ್ರವಿದ್ದರೂ, ಆದಿ ಗುರುಗಳಾದ ಶಂಕರರ ಜಯಂತಿಯಂದು ಉಪನಯನ ಮಾಡುವ ಸಂಪ್ರದಾಯವಿದೆ. ಅಂದು ಯಾವ ದೋಷವೂ ಇರುವುದಿಲ್ಲ ಎನ್ನಲಾಗಿದೆ.
ಡಾ. ಆರ್. ಶೈಲಜ ಶರ್ಮ
ಬೆಂಗಳೂರು-85